Close

ವಿಪತ್ತು ನಿರ್ವಹಣೆ

ಭಾರತ ಸರಕಾರ ಗೃಹ ಸಚಿವಾಲಯದ ಮಾರ್ಗದರ್ಶನದಲ್ಲಿ 2000-01 ನೇ ವರ್ಷದಲ್ಲಿ ಎಟಿಐ ಮೈಸೂರುನಲ್ಲಿವಿಪತ್ತು ನಿರ್ವಹಣೆ ಕೇಂದ್ರವನ್ನು ಸ್ಥಾಪಿಸಲಾಗಿದೆ. ವಿಪತ್ತು ನಿರ್ವಹಣೆ ಕೇಂದ್ರಕ್ಕೆ ಗೃಹ ಸಚಿವಾಲಯ ಭಾರತ ಸರ್ಕಾರ, ರಾಷ್ಟ್ರೀಯ ಇನ್ಸ್ಟಿಟ್ಯೂಟ್ ಆಫ್ ಡಿಸಾಸ್ಟರ್ ಮ್ಯಾನೇಜ್ಮೆಂಟ್, ನವದೆಹಲಿ ಮತ್ತು ಕರ್ನಾಟಕ ಸರ್ಕಾರದಿಂದ ಹಣ ನೀಡಲಾಗುತ್ತದೆ. ಎಟಿಐ ಮೈಸೂರು ಮೂಲಸೌಕರ್ಯ ಸೌಲಭ್ಯಗಳನ್ನು ಈ ಕೇಂದ್ರದ ಜೊತೆ ಹಂಚಿಕೊಂಡಿದೆ. ರಾಜ್ಯದಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳ ಪರಿಣಾಮಕಾರಿ ನಿರ್ವಹಣೆಗಾಗಿ ಸರ್ಕಾರದ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳ ಮತ್ತು ಸಮುದಾಯದಲ್ಲಿ ಕಾರ್ಯಕಾರಿಗಳ ತರಬೇತಿ ಅಗತ್ಯಗಳನ್ನು ಪೂರೈಸುವಲ್ಲಿ ಕೇಂದ್ರವು ಗುರಿ ಹೊಂದಿದೆ. ಈ ಕೇಂದ್ರವು ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನಮನಾದ ಹಿರಿಯ ಐಎಎಸ್ ಅಧಿಕಾರಿಯಾಗಿರುವ ಎಟಿಐ ಮೈಸೂರು Director General ರವರ ನೇತ್ರತ್ವದಲ್ಲಿ ಮತ್ತು ವಿಪತ್ತು ನಿರ್ವಾಹಣ ಕೇಂದ್ರ (CDM) ದ ಸಿಬ್ಬಂದಿಯಿಂದ ನಿರ್ವಹಿಸಲ್ಪಡುತ್ತದೆ. ಸಿಬ್ಬಂದಿಗಳು ಭೂವಿಜ್ಞಾನ, ಭೌತವಿಜ್ಞಾನ, ಪರಿಸರ ವಿಜ್ಞಾನ, ನಾಗರಿಕ ಎಂಜಿನಿಯರಿಂಗ್ / ಸಂಚಾಲಿತ ಎಂಜಿನಿಯರಿಂಗ್ / ವಸತಿ / ಮೂಲಸೌಕರ್ಯ ವಿಭಾಗಗಳಲ್ಲಿನ ಅನುಭವಿ ವೃತ್ತಿಪರರು. ಅತಿಥಿ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಸರ್ಕಾರಿ ಹಿರಿಯ ವ್ಯವಸ್ಥಾಪಕರು, ಖಾಸಗಿ / ಸರ್ಕಾರೇತರ ಸಂಸ್ಥೆಗಳಿಂದ ವಿಪತ್ತು ನಿರ್ವಾಹಕರು ಮತ್ತು ಇತರ ಹಲವಾರು  ಏಜೆನ್ಸಿಗಳನ್ನು ನಿರಂತರವಾಗಿ ಕೇಂದ್ರದ ತರಬೇತಿ ಚಟುವಟಿಕೆಗಳಲ್ಲಿ ಬಳಸಲಾಗುತ್ತಿದೆ.

ಗುರಿ

ವಿಪತ್ತು ನಿರ್ವಹಣಾ ಕೇಂದ್ರವು ರಾಜ್ಯದಲ್ಲಿ ನೈಸರ್ಗಿಕ ಮತ್ತು ಮಾನವ ನಿರ್ಮಿತ ದುರಂತದ ನಿರ್ವಹಣೆಯ ಜವಾಬ್ದಾರರಾಗಿರುವ ಸರ್ಕಾರಿ, ಸ್ಥಳೀಯ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಯಕರ್ತರ ಸಾಮರ್ಥ್ಯವನ್ನು ನಿರ್ಮಿಸುವ ಗುರಿಯನ್ನು ಹೊಂದಿದೆ.

ಉದ್ದೇಶಗಳು

  • ವಿಪತ್ತು ನಿರ್ವಹಣೆಯ ವಿವಿಧ ವಿಷಯಗಳ ಕುರಿತು ತರಬೇತಿ ಕಾರ್ಯಕ್ರಮಗಳು ಮತ್ತು ಕಾರ್ಯಾಗಾರಗಳನ್ನು ನೆಡೆಸುವುದು.
  • ವಿಪತ್ತು ನಿರ್ವಹಣೆಯ ಕುರಿತಾದ ಪ್ರಕರಣಗಳ ಅಧ್ಯಯಣ, ಸಂಶೋಧನೆ ಮತ್ತು ದಾಖಲಾತಿಗಳನ್ನು ತಯಾರಿಸುವುದು.
  • ಜಿಲ್ಲೆಯ ನಿರ್ವಹಣಾ ಯೋಜನೆಗಳನ್ನು ರೂಪಿಸಲು ಜಿಲ್ಲೆಯ ಆಡಳಿತಕ್ಕೆ ಸಹಾಯಮಾಡುವುದು.
  • ವಿಪತ್ತು ನಿರ್ವಹಣೆಯ ಮೇಲೆ ಅಣಕುಪ್ರದರ್ಶನಗಳನ್ನು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಯೋಜಿಸುವುದು.
  • ವಿಪತ್ತು ನಿರ್ವಹಣೆ ಕುರಿತು ಮಾಹಿತಿ, ಶಿಕ್ಷಣ ಮತ್ತು ಸಂವಹನ ಸಾಮಗ್ರಿಗಳನ್ನು ತಯಾರಿಸಲು ಮತ್ತು ಪ್ರಸಾರ ಮಾಡುವುದು.
  • ಟಿವಿ / ರೇಡಿಯೋ / ಸುದ್ದಿ ಕಾಗದ ಇತ್ಯಾದಿಗಳಂತಹ ವಿಭಿನ್ನ ಮಾಧ್ಯಮಗಳ ಮೂಲಕ ಸಮುದಾಯದಲ್ಲಿ ಅರಿವು ಮೂಡಿಸುವುದು.

ಗದಗ ವಿಪತ್ತು ನಿರ್ವಹಣಾ ಯೋಜನೆ 2023-24

DisasterManagementImage