Close

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ

ಪೀಠಿಕೆ

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯು 1959 ರಲ್ಲಿ ಸ್ಥಾಪಿಸಲ್ಪಟ್ಟಿದೆ. ನಗರ ಮತ್ತು ಗ್ರಾಮಗಳ ವ್ಯವಸ್ಥಿತ ಬೆಳವಣಿಗೆಗಳಿಗಾಗಿ ಅಭಿವೃಧ್ಧಿ ಯೋಜನೆಗಳನ್ನು ಸಿದ್ದಪಡಿಸುವುದು ಮತ್ತು ಯೋಜನೆಗಳನ್ನು ಸಮರ್ಕವಾಗಿ ಕಾರ್ಯಗತಗೊಳಿಸಲು ಅಗತ್ಯವಾದ ತಾಂತ್ರಿಕ ನೆರವನ್ನು ನಗರಾಭಿವೃಧ್ಧಿ ಪ್ರಾಧಿಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ನೀಡುವುದು ಇಲಾಖೆಯ ಪ್ರಮುಖ ಕಾರ್ಯಚಟುವಟಿಕೆಯಾಗಿರುತ್ತದೆ.

ಇಲಾಖೆಯು ನಿರ್ದೇಶನಾಲಯ ಬೆಂಗಳೂರಿನಲ್ಲಿದ್ದು ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖಾ ಮುಖ್ಯಸ್ಥರಾಗಿರುತ್ತಾರೆ. ನಗರ ಮತ್ತು ಗ್ರಾಮಾಂತರ ಯೋಜನಾ ಹೆಚ್ಚುವರಿ ನಿರ್ದೇಶಕರ ಇವರ ನೇತೃತ್ವದಲ್ಲಿ ಬೆಳಗಾವಿ ವಲಯ ಕಚೇರಿ, ನಗರ ಮತ್ತು ಗ್ರಾಮಾಂತರ ಯೋಜನಾ ಜಂಟಿ ನಿರ್ದೇಶಕರ ನೇತೃತ್ವದಲ್ಲಿ 3 ವಿಭಾಗೀಯ ಕಚೇರಿಗಳನ್ನು ಮೈಸೂರು, ಕಲಬುರಗಿ ಹಾಗೂ ಬೆಂಗಳೂರು ಮತ್ತು ನಗರ ಮತ್ತು ಗ್ರಾಮಾಂತರ ಸಹಾಯಕ ನಿರ್ದೇಶಕರ ನೇತೃತ್ವದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಹಾಗೂ ಕೆಲವು ಪ್ರಮುಖ ನಗರಗಳಲ್ಲಿ 30 ಶಾಖಾ ಕಚೇರಿಗಳನ್ನು ಹೊಂದಿದೆ.

ಕಾರ್ಯ ಚಟುವಟಿಕೆಗಳು

  • ಸರಕಾರಕ್ಕೆ ಸಮರ್ಪಕ ರಾಜ್ಯದ ನಗರ / ಪಟ್ಟಣ ಮತ್ತು ಗ್ರಾಮಗಳ ಅಭಿವೃಧ್ಧಿ ಯೋಜನೆ ಕಾರ್ಯಗತಗೊಳಿಸಲು ಅಗತ್ಯವಾದ ತಾಂತ್ರಿಕ ಅಭಿಪ್ರಾಯ ನೀಡುವುದು.
  • ನಗರ ಮತ್ತು ಗ್ರಾಮಾಂತರ ಪ್ರದೇಶಗಳಿಗೆ ಮಹಾಯೋಜನೆಗಳನ್ನು ತಯಾರಿಸುವುದು
  • ಸ್ಥಳೀಯ ಸಂಸ್ಥೆಗಳು ಹಾಗೂ ಯೋಜನಾ ಪ್ರಾಧಿಕಾರಗಳಿಗೆ ನಗರ ಮತ್ತು ಗ್ರಾಮಗಳ ವಿಸ್ತರಿತ ಯೋಜನೆ ತಯಾರಿಸಿ ಕೊಡುವುದು.
  • ಪುನರ ವಸತಿ ಪುನರ್ ನಿರ್ಮಾಣ ಯೋಜನೆಗಳಿಗೆ ಸಂಬಂಧಿಸಿದಂತೆ ಯೋಜನೆಗಳನ್ನು ತಯಾರಿಸುವುದು.
  • ಸರ್ಕಾರದ ಎಲ್ಲಾ ವಿವಿಧ ಇಲಾಖೆಗಳಿಗೆ ಯೋಜನೆ ಕುರಿತು ತಾಂತ್ರಿಕ ಸಹಾಯ ನೀಡುವುದು. ಮತ್ತು ವ್ಯವಸಾಯ ಜಮೀನುಗಳನ್ನು ವ್ಯವಸಾಯೇತರ ಉದ್ದೇಶಕ್ಕೆ ಭೂ-ಪರಿವರ್ತಿಸುವಾಗ ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡುವುದು.
  • ಅಭಿವೃಧ್ಧಿ ಯೋಜನೆಗಳ ಪ್ರಸ್ತಾವನೆಗಳ ತಯಾರಿಕೆ ಹಾಗೂ ಅನುಷ್ಟಾನಗೊಳಿಸುವಿಕೆ ಕುರಿತು ವಿವಿಧ ನಗರಾಭಿವೃಧ್ಧಿ ಪ್ರಾಧಿಕಾಗಳು, ನಗರ ಯೋಜನಾ ಪ್ರಾಧಿಕಾರಗಳು, ನಗರ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ನೆರವನ್ನು ನೀಡುವುದು.
  • ಪಾರಂಪರಿಕ ಕಟ್ಟಡಗಳ ಹಾಗೂ ಸ್ಮಾರಕಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಮಾರ್ಗಸೂಚಿ ಹಾಗೂ ನಿಯಮಗಳನ್ನು ತಯಾರಿಸುವುದು.

ಧ್ಯೇಯ ಮತ್ತು ಉದ್ದೇಶಗಳು

  • ಸ್ಥಳೀಯ ಸಂಸ್ಥೆಗಳಿಗೆ ಮಹಾ ಯೋಜನೆಗಳನ್ನು ತಯಾರಿಸುವಲ್ಲಿ ತಾಂತ್ರಿಕ ನೆರವು ನೀಡುವುದು.
  • ನಗರ ಮತ್ತು ಪಟ್ಟಣದ ಮೂಲ ನಕ್ಷೆಗಳನ್ನು ಕಾಲೋಚಿತಗೊಳಿಸುವುದು. ( ಅರ್ಬನ್ ಮ್ಯಾಪಿಂಗ )
  • ಕರ್ನಾಟಕ ಕೊಳಚೆ ಅಭಿವೃಧ್ಧಿ ಮಂಡಳಿ, ಕರ್ನಾಟಕ ಗೃಹ ಮಂಡಳಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃಧ್ಧಿ ಮಂಡಳಿ, ಹಾಗೂ ಇತರೆ ಸ್ಥಳೀಯ ಸಂಸ್ಥೆಗಳಿಗೆ ತಾಂತ್ರಿಕ ನೆರವು ನೀಡುವುದು.
  • ವ್ಯವಸಾಯ ಜಮೀನುಗಳನ್ನು ವ್ಯವಸಾಯೇತರ ಉದ್ದೇಶಕ್ಕೆ ಭೂ- ಪರಿವರ್ತಿಸುವಾಗ ಕಂದಾಯ ಇಲಾಖೆಗೆ ತಾಂತ್ರಿಕ ಅಭಿಪ್ರಾಯ ನೀಡುವುದು.
  • ಪುನರ್ವಸತಿ ಹಾಗೂ ಪುನರ್ ನಿರ್ಮಾಣ ಯೋಜನೆಗಳ ತಯಾರಿಕೆ ಹಾಗೂ ಅನುಷ್ಟಾನಗೊಳಿಸುವ ಸಂಬಂಧ ತಾಂತ್ರಿಕ ಸಹಾಯ ಒದಗಿಸುವುದು.

ಚಟುವಟಿಕೆಗಳು

ವ್ಯವಸಾಯ ಜಮೀನುಗಳನ್ನು ವ್ಯವಸಾಯೇತರ ಉದ್ದೇಶಕ್ಕೆ ಭೂ- ಪರಿವರ್ತಿಸುವುದು (ಭೂಕಂದಾಯ ಕಾಯಿದೆ 1964ರ 95 ಅಡಿಯಲ್ಲಿ)

ಅರ್ಜಿ

ಭೂಮಿಯ ಮಾಲೀಕರು ಕಂದಾಯ ಪ್ರಾಧಿಕಾರರಿಗೆ (ತಹಸೀಲ್ದಾರ್ ಅಥವಾ ಸಹಾಯಕ ಆಯುಕ್ತರು ಅಥವಾ ಜಿಲ್ಲಾಧಿಕಾರಿಗಳಿಗೆ ಭೂಮಿಯ ವಿಸ್ತೀರ್ಣ ಆಧಾರದ ಮೇಲೆ) ಅರ್ಜಿ ಸಲ್ಲಿಸಬೇಕು. ಕಂದಾಯ ಪ್ರಾಧಿಕಾರವು ನಗರಾಭಿವೃದ್ಧಿ ಪ್ರಾಧಿಕಾರವರಿಂದ/ಪುರಸಭೆಯ ಯೋಜನಾ ಪ್ರಾಧಿಕಾರವರಿಂದ/ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರವರಿಂದ ಏನ ಓ ಸಿ ನೀಡುವುದಕ್ಕೆ ಅಥವಾ ವ್ಯವಸಾಯ ಜಮೀನುವು ವ್ಯವಸಾಯೇತರ ಉದ್ದೇಶಕ್ಕೆ ಭೂ- ಪರಿವರ್ತಿಸುವುಕ್ಕೆ ಅಭಿಪ್ರಾಯ ಕೋರುತ್ತಾರೆ.

ಅರ್ಜಿಯನ್ನೊಂದಿಗೆ ಒದಗಿಸಬೇಕಾದ ವಿವರಗಳು ಹೀಗಿವೆ

ಕೆಳಗಿನ ವಿವರಗಳನ್ನು ಅರ್ಜಿಯೊಂದಿಗೆ ಸಂಬಂಧಪಟ್ಟ ಕಂದಾಯ ಪ್ರಾಧಿಕಾರವರಿಗೆ ಸಲ್ಲಿಸಬೇಕು:

  • ಭೂಮಿ ಮೇಲೆ ಅಧಿಕಾರವನ್ನು ದೃಢೀಕರಿಸಿದ ಅಥವಾ ಮಾಲೀಕತ್ವದ ಪುರಾವೆಗಾಗಿ ಒಪ್ಪಂದ ಪತ್ರದ ಛಾಯಾಪ್ರತಿ.
  • ತಾಲೂಕಿನ ಕಂದಾಯ ಪ್ರಾಧಿಕಾರದಿಂದ ನೀಡಿರುವ ಆರ್ ಟಿ ಸಿ ಯ ಇತ್ತೀಚಿನ ಮೂಲ ಪ್ರತಿ.
  • ಭೂಮಿಯ/ಆಸ್ತಿಯು ವ್ಯಾಪ್ತಿಯಲ್ಲಿ ಬರುವ ಉಪ ನೋಂದಣಿ ಕಚೇರಿಯಿಂದ ವಿತರಿಸಿರುವ ಆಸ್ತಿಯ ಮೇಲೆ ಬೇರೆಯವರ ಹಕ್ಕು(EC) ಪ್ರಮಾಣಪತ್ರ.
  • ಪರಿವರ್ತನೆಗಾಗಿ ಪ್ರಸ್ತಾಪಿಸಲಾದ ಭೂಮಿಯ ಮೀಟರ್ ಮತ್ತು ಗಡಿರೇಖೆ ತೋರಿಸುವ ಸಕ್ಷಮ ಪ್ರಾಧಿಕಾರದಿಂದ ದೃಡೀಕರಿಸಿದ ಭೂಮಿಯ ಅಟ್ಲಾಸಿನ್(ಸಮೀಕ್ಷೆ ಸಂಖ್ಯೆ) ಛಾಯಾಪ್ರತಿ.
  • ಪರಿವರ್ತನೆಗಾಗಿ ಪ್ರಸ್ತಾಪಿಸಲಾದ ಭೂಪ್ರದೇಶವನ್ನು ತೋರಿಸುವ ಗ್ರಾಮದ ಕಂದಾಯ ಸಮೀಕ್ಷೆಯ ನಕ್ಷೆ ಛಾಯಾಪ್ರತಿ
  • ಭೂಮಿ ಆದಾಯವನ್ನು (ತೆರಿಗೆ) ಪಾವತಿಸಿರುವ ಇತ್ತೀಚಿನ ರಸೀದಿಯ ಛಾಯಾಪ್ರತಿ.
  • ಅರ್ಜಿಯನ್ನು ಪ್ರಕ್ರಿಯೆಗೊಳಿಸಲು ಮರುಪಾವತಿಸಲಾಗದ ಶುಲ್ಕದ ಪಾವತಿಸಿರುವ ಚಲನ್.
  • 1: 1000 ಗಿಂತ ಕಡಿಮೆ ಇರದಂತ ಅಗಲಿನ ಸೈಟ್ ಯೋಜನೆಯ ಸುತ್ತಮುತ್ತಲಿನ ಬೆಳವಣಿಗೆಗಳ ವಿವರಗಳನ್ನು, ಸುತ್ತಮುತ್ತಲಿನ ಸಮೀಕ್ಷೆಯ ಸಂಖ್ಯೆಗಳು ಮತ್ತು ಹಿಸ್ಸಾಗಳು, ಬಾಹ್ಯರೇಖೆಗಳು, ಸ್ಪಾಟ್ ಎತ್ತರಗಳು, ರಸ್ತೆ ವರ್ಗೀಕರಣ ಮತ್ತು ಅದರ ಅಗಲ, ಉದ್ದೇಶಿತ ಭೂಪ್ರದೇಶದ ಪಕ್ಕದ ಪ್ರದೇಶಗಳಲ್ಲಿನ ಬೆಳವಣಿಗೆಗಳ ವಿವರಗಳನ್ನು ತೋರಿಸುವ ನಕ್ಷೆ.

ವಿಧಾನ

ಕೆ.ಟಿ.ಸಿ.ಪಿ 1961 ಕಾಯಿದೆ ಅಡಿಯಲ್ಲಿ ರಚಿಸಲಾದ ಯಾವುದೇ ನಗರ ಅಭಿವೃದ್ಧಿ ಪ್ರಾಧಿಕಾರ / ಯೋಜನಾ ಪ್ರಾಧಿಕಾರ / ಪುರಸಭೆಯ ಯೋಜನಾ ಪ್ರಾಧಿಕಾರ ವ್ಯಾಪ್ತಿಯೊಳಗೆ ಭೂಮಿ ನೆಲೆಗೊಂಡಿಲ್ಲದಿದ್ದರೆ ಮತ್ತು ಭೂಮಿಯು ವ್ಯವಸ್ಥಿತ ಬೆಳವಣಿಗೆಗೆ ನಿಯಂತ್ರಿಸುವುಕ್ಕೆ ಕಾರಣವಾಗಿದ್ದರೆ, ಸಂಬಂಧಪಟ್ಟ ಕಂದಾಯ ಪ್ರಾಧಿಕಾರವು ದಾಖಲೆಗಳನ್ನು ಪರಿಶೀಲಿಸಿ ನಂತರ ಅರ್ಜಿ ಮತ್ತು ದಾಖಲೆಯ ಪ್ರತಿಗಳನ್ನು

  • ತಾಂತ್ರಿಕ ಅಭಿಪ್ರಾಯ / ಎನ್ಒಸಿ ಗಾಗಿ ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರವರಿಗೆ ಕಳುಹಿಸಲಾಗುವುದು
  • ಅನುಮೋದಿತ ಮಾಸ್ಟರ್ ಪ್ಲಾನ್ ಪ್ರಕಾರ ದಾಖಲೆಗಳನ್ನು ಪರಿಶೀಲಿಸಿ, ವ್ಯವಸಾಯ ಜಮೀನುವು ವ್ಯವಸಾಯೇತರ ಪರಿವರ್ತಿಸುವ ಅಭಿಪ್ರಾಯಕ್ಕೆ ಸಂಬಂಧಪಟ್ಟ ಕಂದಾಯ ಪ್ರಾಧಿಕಾರವರಿಗೆ ಕಳುಹಿಸಲಾಗುವುದು.

ಪರಿವರ್ತನೆಯ ಆದೇಶ ನೀಡುವುದು

ಎಲ್ಲಾ ಸಂಬಂಧಪಟ್ಟ ಇಲಾಖೆ/ಪ್ರಾಧಿಕಾರಯಿಂದ ಎನ್ಒಸಿ/ಅಭಿಪ್ರಾಯ ಪಡೆದ ನಂತರ ನಿಗದಿತ ಶುಲ್ಕವು ಪಾವತಿಸಿದ ನಂತರ ಕಂದಾಯ ಪ್ರಾಧಿಕಾರವು ಅರ್ಜಿದಾರರಿಗೆ ಸಂಬಂಧಪಟ್ಟ ಕಂದಾಯ ಪ್ರಾಧಿಕಾರದಿಂದ ಶರತ್ತುಗಳ ಅನುಗುಣವಾಗಿ ಪರಿಗಣಿಸಬಹುದಾದಂತಹ ಪರಿವರ್ತನೆಯ ಆದೇಶವನ್ನು ನೀಡಲಾಗುತ್ತದೆ.

ವಿನ್ಯಾಸ ಅನುಮೋದನೆ

ವಿನ್ಯಾಸ / ಉಪ-ವಿಭಾಗ ಯೋಜನೆಯ ಅನುಮೋದನೆಗೆ ಕಾರ್ಯವಿಧಾನ

  • ವ್ಯವಸಾಯ ಜಮೀನುವು ವ್ಯವಸಾಯೇತರ ಉದ್ದೇಶಕ್ಕೆ ಪರಿವರ್ತನೆಯಾಗಿರುವ ಜಮೀನ ಮಾಲೀಕರು ಅಥವಾ ಕಾನೂನುಬದ್ಧ ಜಮೀನ ಅಧಿಕಾರಿಯು ಸಂಬಂಧಪಟ್ಟ ದಾಖಲೆಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರರಿಗೆ ಪರಿಗಣಿಸಲು ಕಳುಹಿಸಬೇಕು.
  • ದಾಖಲೆಗಳನ್ನು ಪರಿಶೀಲಿಸಿದ ನಂತರ ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರರಿಂದ ಅರ್ಜಿ ಮತ್ತು ದಾಖಲೆಗಳ ಪ್ರತಿಯನ್ನು ನಗರ ಮತ್ತು ಗ್ರಾಮಾಂತರ ಯೋಜನಾ ಪ್ರಾಧಿಕಾರವರಿಗೆ ವಿನ್ಯಾಸದ ತಾಂತ್ರಿಕ ಅನುಮೋದನೆಗಾಗಿ ಕಳುಹಿಸಲಾಗುವುದು.
  • ದಾಖಲೆಗಳನ್ನು ಪರೀಕ್ಷಿಸಿದ ನಂತರ ಹೆಚ್ಚುವರಿ ಸ್ಪಷ್ಟೀಕರಣ ಅಗತ್ಯವಾದರೆ ಅರ್ಜಿದಾರನು ಅಗತ್ಯವಿರುವ ಮಾಹಿತಿಯನ್ನು ಅಥವಾ ದಾಖಲೆಗಳನ್ನು ಇಲಾಖೆಗೆ ಒದಗಿಸಬೇಕು.
  • ಪರಿಶೀಲನೆ ಮತ್ತು ಸೈಟ್ ತಪಾಸಣೆಯು ಸರಿಯಾಗಿದ್ದ ನಂತರ ಅಗತ್ಯವಿರುವ ಶುಲ್ಕವನ್ನು ಪಾವತಿಸುವುದರ ಮೇಲೆ ಇಲಾಖೆಯು ವಿನ್ಯಾಸ ಯೋಜನೆಗೆ ನಿರ್ದಿಷ್ಟಪಡಿಸಲಾಗಿದ್ದ ಶರತ್ತುಗಳ ಮೇಲೆ ಹಾಗೂ ಸೈಟ್ಗಳ ಬಿಡುಗಡೆಯ ಸರ್ಕಾರದ ಶರತ್ತಿನ ಸುತ್ತೋಲೆಯ ಪ್ರಕಾರ ತಾಂತ್ರಿಕ ಅನುಮೋದನೆಯನ್ನು ನೀಡಲಾಗುತ್ತದೆ.
  • ಉಪ-ವಿಭಾಗ ಯೋಜನೆಗೆ ಮಾರ್ಪಾಡುಗಳು ಅಥವಾ ಪರಿಷ್ಕರಣೆ ಅಗತ್ಯವಿದ್ದರೆ, ಅರ್ಜಿದಾರನು ಅಂತಹ ಮಾರ್ಪಾಡುಗಳೊಂದಿಗೆ ಅಥವಾ ಸ್ಥಳೀಯ ಪ್ರಾಧಿಕಾರ ಮೂಲಕ ಸೂಕ್ತ ದಾಖಲೆಗಳೊಂದಿಗೆ ಪರಿಷ್ಕರಣೆ ಮಾಡುವಂತೆ ಅರ್ಜಿ ಸಲ್ಲಿಸಬೇಕು.

ವಿನ್ಯಾಸ ಅನುಮೋದನೆಗೆ ನಿರ್ದಿಷ್ಟಪಡಿಸಲಾಗಿದ ದಾಖಲೆಗಳ ಪಟ್ಟಿ

  • ಮಾರಾಟ ಪತ್ರ / ವಿಭಜನೆಯ ಪತ್ರ, ಇತ್ತೀಚಿನ ಇಸಿ ಫಾರ್ಮ್ ಸಂಖ್ಯೆ -15 ಮತ್ತು 16
  • ಇತ್ತೀಚಿನ ಆರ್ಟಿಸಿ ಪ್ರತಿ, ಮ್ಯುಟೇಷನ್/ಖಾತಾ ಪ್ರಮಾಣ ಪತ್ರ ಪ್ರತಿ ಮತ್ತು ಜಮೀನು ಸ್ವಾಧೀನ ವಿವರಗಳು ಇದ್ದಲ್ಲಿ.
  • ಸಕ್ಷಮ ಪ್ರಾಧಿಕಾರದಿಂದ ದೃಡೀಕರಿಸಿದ ಮೂಲ ಸರ್ವೆ ರೇಖಾಚಿತ್ರ (ಎಲ್ಲಾ-ಸುತ್ತಿನ ಅಳತೆಗಳನ್ನು ತೋರಿಸಿರಬೇಕು), ಹಳ್ಳಿಯ ನಕ್ಷೆ, ಆಕಾರಬಂದ.
  • ಆಸ್ತಿಯ ತುದಿಯಿಂದ 100 ಮಿಟ್ಗಳಷ್ಟು ಭೂಮಿ, ಬಾಹ್ಯರೇಖೆಗಳು ಮತ್ತು ಸುತ್ತಮುತ್ತಲಿನ ವಿವರಗಳನ್ನು ತೋರಿಸುವ ಟೋಟಲ್ ಸ್ಟೇಷನ್ನಿಂದ ಸಿದ್ಧಪಡಿಸಲಾಗಿದ್ ಸೈಟ್ ಯೋಜನೆ.
  • ರಸ್ತೆಯ ವಿಧಿ ವಿವರಗಳು (ಅಂದರೆ ರಸ್ತೆ, ಅಗಲ, ಇತ್ಯಾದಿ ವರ್ಗೀಕರಣ).
  • ಕಂದಾಯ ಪ್ರಾಧಿಕಾರದಿಂದ ದೃಡೀಕರಿಸಿದ ಪರಿವರ್ತನೆಯ ಆದೇಶ.
  • ಪರಿಕಲ್ಪನೆ ಯೋಜನೆ (ಅರ್ಜಿದಾರರಿಂದ ಅಂಗೀಕೃತ ವಲಯದ ನಿಬಂಧನೆಗಳ ಪ್ರಕಾರ ಸಿದ್ಧಪಡಿಸಲಾದ ಕರಡು ಯೋಜನೆ).
  • 10.0 ಎಕರೆಗಳಿಗಿಂತ ಹೆಚ್ಚು ಪ್ರದೇಶ ಇದ್ದರೆ ಕೆಎಸ್ಪಿಸಿಬಿನಿಂದ ಎನ್ಒಸಿ.

ಶುಲ್ಕಗಳು

ವಿನ್ಯಾಸ ಸಿದ್ಧತೆ ಮತ್ತು ಪರಿಶೀಲನೆ ಶುಲ್ಕಗಳು ರೂಪಾಯಿ 1250 / ಹೆಕ್ಟೇರ್. ವಿನ್ಯಾಸಿನ ಹೆಚ್ಚುವರಿ ಪ್ರತಿಗೆ ರೂಪಾಯಿ 100 / ಶೀಟ್.

ಕರ್ತವ್ಯ ನಿರ್ವಹಣೆಗಾಗಿ ನಿಗದಿಪಡಿಸಲಾಗಿರುವ ಸೂತ್ರಗಳು

ಕಚೇರಿಯ ಕಾರ್ಯನಿರ್ವಹಣೆಯು ವಿವಿಧ ಕಾಯ್ದೆಗಳಲ್ಲಿ ನೀಡಿರುವ ಸೂಚನೆಗಳಂತೆ, ಸರ್ಕಾರದಿಂದ ಜಾರಿಗೊಳಿಸಲಾದ ಆದೇಶಗಳು, ಸುತ್ತೋಲೆಗಳು ಮತ್ತು ವಿವಿಧ ಹಂತಗಳಲ್ಲಿ ನೀಡಲಾಗಿರುವ ಸೂಚನೆಗಳನ್ವಯ ಕರ್ತವ್ಯಗಳನ್ನು ನಿರ್ವಹಿಸಲಾಗುತ್ತಿದೆ.

ಇಲಾಖೆಯ ನೌಕರರು ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಅನುಸರಿಸುತ್ತಿರುವ ನಿಯಮಗಳು,ನಿಯಮಾವಳಿಗಳು,ಸೂಚನೆಗಳು,ಕೈಪಿಡಿಗಳು ಮತ್ತು ದಾಖಾಲಾತಿಗಳ ವಿವರ

  • ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ, 1961
  • ಕರ್ನಾಟಕ ರಾಜ್ಯ ನಗರ ಯೋಜನಾ ಮಂಡಳಿ ನಿಯಮಾವಳಿ, 1964
  • ಕರ್ನಾಟಕ ಯೋಜನಾ ಪ್ರಾಧಿಕಾರ ನಿಯಮಾವಳಿ, 1965
  • ಕರ್ನಾಟಕ ಯೋಜನಾ ಪ್ರಾಧಿಕಾರ ಕಾಯ್ದೆ, 1987
  • ಬೆಂಗಳೂರು ಅಭಿವೃಧ್ಧಿ ಪ್ರಾಧಿಕಾರ ಕಾಯ್ದೆ, 1976
  • ಬೆಂಗಳೂರು ಮಹಾನಗರ ಪ್ರದೇಶಾಭಿವೃಧ್ಧಿ ಪ್ರಾಧಿಕಾರ ಕಾಯ್ದೆ, 1985
  • ಕರ್ನಾಟಕ ಮುನ್ಸಿಪಲ್ ಕಾರ್ಪೋರೇಷನ್ ಕಾಯ್ದೆ, 1976
  • ಕರ್ನಾಟಕ ಮುನ್ಸಿಪಾಲಿಟಸ್ ಕಾಯ್ದೆ, 1964
  • ಭೂ ಸ್ವಾಧೀನತೆ ಕಾಯ್ದೆ, 1897
  • ಕರ್ನಾಟಕ ಲ್ಯಾಂಡ್ ರೀಫಾರ್ಮ್ ಕಾಯ್ದೆ, 1964
  • ಕರ್ನಾಟಕ ಗೃಹ ಮಂಡಳಿ ಕಾಯ್ದೆ
  • ಕರ್ನಾಟಕ ಸಿನಿಮಾ ( ರೆಗ್ಯುಲೇಷನ್ )ಕಾಯ್ದೆ, 1964
  • ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಕಾಯ್ದೆ
  • ಕರ್ನಾಟಕ ಇಂಡಸ್ಟ್ರಿಯಲ್ ಏರಿಯಾ ಡೆವಲಪ್ಮೆಂಟ್ ಬೋರ್ಡ್ ಕಾಯ್ದೆ
  • ಕರ್ನಾಟಕ ನಾಗರೀಕ ಸೇವಾ ನಿಯಮಾವಳಿ 1957
  • ನ್ಯಾಷನಲ್ ಹೈವೇಸ್ ಕಾಯ್ದೆ 1956
  • ಕರ್ನಾಟಕ ಹೈವೇಸ್ ನಿಯಮಾವಳಿ 1965

ವಿವಿಧ ಯೋಜನೆಗಳ ತಯಾರಿಕೆ ಮತ್ತು ಯೋಜನೆಗಳಿಗೆ ಸಂಬಂಧಪಟ್ಟಂತ ಸಾರ್ವಜನಿಕರ ಪ್ರಾತಿನಿಧ್ಯತೆ ಸಮಾಲೋಚನೆಯ ಕುರಿತು ಇರುವ ವ್ಯವಸ್ಥೆಯ ವಿವರಗಳು.

ಇಲಾಖೆಯ ನೆರವಿನೊಂದಿಗೆ ಸಿದ್ದಪಡಿಸಲಾದ ಮಾಸ್ಟರ್ ಪ್ಲಾನ್ ಕರಡನ್ನು ಸಂಬಂಧಿತ ಯೋಜನಾ ಪ್ರಾಧಿಕಾರಗಳು ಸಾರ್ವಜನಿಕರಿಗೆ ಪ್ರಕಟಿಸಲಾಗುತ್ತಿದ್ದು, ಸಾರ್ವಜನಿಕರಿಂದ ಬಂದ ಸಲಹೆ: ಸೂಚನೆಗಳನ್ನು ನಿಯಮಾವಳಿಯ ಅನ್ವಯ ಪರಇಶೀಲಿಸಿ ಅಂತಿಮ ಯೋಜನೆಯನ್ನು ಸಿದ್ದಪಡಿಸಿ ಸರ್ಕಾರದ ಅನುಮೋದನೆಯನ್ನು ಪಡೆಯಲು ಯೋಜನಾ ಪ್ರಾಧಿಕಾರಗಳಿಗೆ ಇಲಾಖೆಯು ಸಹಕಾರಿಯಾಗಿರುತ್ತದೆ.

ಸಾರ್ವಜನಿಕ ಸಹಬಾಗಿತ್ವ

ಯೋಜನಾ ಪ್ರಾಧಿಕಾರಗಳ ಮತ್ತು ನಗರಾಭಿವೃಧ್ಧಿ ಪ್ರಾಧಿಕಾರಗಳ ಮಟ್ಟದಲ್ಲಿ ಯೋಜನೆಗಳನ್ನು ತಯಾರಿಸುವಾಗ ನಾಗರೀಕರ ಅಭಿಪ್ರಾಯಗಳು ಅವಶ್ಯವಾಗಿರುತ್ತದೆ.

ಈ ಇಲಾಖೆಯಿಂದ ನೇರವಾಗಿ ಸಾರ್ವಜನಿಕರಿಗೆ ಸಂಬಂಧಪಟ್ಟಂತೆ ಯಾವುದೇ ಸೇವೆಯನ್ನು ನೀಡುತ್ತಿರುವುದಿಲ್ಲ. ಬದಲಾಗಿ ಈ ಇಲಾಖೆಯಿಂದ ಎಲ್ಲಾ ನಗರಾಭಿವೃಧ್ಧಿ ಪ್ರಾಧಿಕಾರ ಮತ್ತು ನಗರ ಯೋಜನಾ ಪ್ರಾಧಿಕಾರಗಳಿಗೆ ಮಾಸ್ಟರ್ ಪ್ಲಾನ್, ವಿನ್ಯಾಸ ಅನುಮೋದನೆ ಮತ್ತು ಯೋಜನೆಗಳ ಕುರಿತು ತಾಂತ್ರಿಕ ಅಭಿಪ್ರಾಯ ನೀಡುತ್ತಿವೆ. ಕಾರಣ ನೇರವಾಗಿ ಸಾರ್ವಜನಿಕರೊಂದಿಗೆ ಯಾವುದೇ ಚಟುವಟಿಕೆ ಈ ಇಲಾಖೆಯಿಂದ ಇರುವುದಿಲ್ಲ.

ಸಂಪರ್ಕ ವಿವರಗಳು

ಶಾಖಾ ಕಚೇರಿ

ಸಹಾಯಕ ನಿರ್ದೇಶಕರ ಕಚೇರಿ,

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆ,

ಜಿಲ್ಲಾಡಳಿತ ಭವನ,

ಕೊಠಡಿ ಸಂಖ್ಯೆ:-201,

ಹುಬ್ಬಳ್ಳಿ ರೋಡ,

ಗದಗ-582101.

ದೂರವಾಣಿ ಸಂಖ್ಯೆ: 08372-220232 , ಇ-ಮೇಲ್:- 

ಕೇಂದ್ರ ಕಚೇರಿ

ನಿರ್ದೇಶಕರು,

ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ,

4ನೇಹಂತ

ಬಹುಮಹಡಿಗಳ ಕಟ್ಟಡ,

ಡಾ:ಬಿ.ಆರ್.ಅಂಬೇಡ್ಕರ್ ವೀಧಿ,

ಬೆಂಗಳೂರು-560001.

ದೂರವಾಣಿ ಸಂಖ್ಯೆ: 080-22258988.

ಇ-ಮೇಲ್ :

ಸಹಾಯವಾಣಿ